ಸಖತ್ ಚಿತ್ರತಂಡದ ವಿರುದ್ಧ ಗರಂ
ಸಖತ್ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಕಣ್ಣು ಕಾಣದವರಿಗೆ ಕುರುಡರು ಎಂಬ ಶಬ್ದ ಬಳಕೆ ಮಾಡಬಾರದು ಎಂಬ ನಿಯಮವಿದೆ. ಆದರೆ ಈ ಚಿತ್ರದಲ್ಲಿ ಆ ಪದ ಬಳಕೆ ಮಾಡಿದ್ದರಿಂದ ಸಖತ್ ಸಿನಿಮಾಗೆ ಸ್ಟೇ ತರಲು ಅಂಧ ಸಮುದಾಯದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಅಂಧ ಸಮುದಾಯದವರಿಗೆ ಕ್ಷಮೆ ಕೇಳುವ ಮೂಲಕ ಸಮಸ್ಯೆಯನ್ನ ಬಗೆ ಹರಿಸಿಕೊಂಡಿದೆ. ಇನ್ನು ಸಿನಿಮಾನದಲ್ಲಿ ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾರೀ ಮೆಚ್ಚುಗೆ ಪಡೆದಿದ್ದಾರೆ. ನಟಿ ಸುರಭಿ ಉತ್ತಮವಾಗಿ ಅಭಿನಯಿಸಿದ್ದಾರೆ.
news desk
times of bengaluru