ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ನಾಳೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ತುರ್ತು ನಿರ್ವಹಣಾ ಕೆಲಸಗಳನ್ನು (ಫರ್ನೇಸ್ ಗಳನ್ನು ಬದಲಾಯಿಸುವ ಸಲುವಾಗಿ) ಕೈಗೊಳ್ಳಬೇಕಾಗಿರುವುದರಿಂದ 4-05-2021 ರಿಂದ 10-05-2021ರವರೆಗೆ ಎಳು (7) ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ ಎಂದು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ರಾಜರಾಜೇಶ್ವರಿ ನಗರ ವಲಯ) ರವರು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
NEWS DESK
TIMES OF BENGALURU